Wednesday, September 11, 2013

ದೇವರ ಮಾತಿನ ಸಾರಾಂಶಂಗೊ (ಭಗವದ್ ಗೀತೆಯ ಸಾರ) - 1

ನಾವೆಲ್ಲಾ ಭಗವದ್ ಗೀತೆಯ ಸಂದೇಶ ಹೇಳಿ ಹೆಸರು ಹಾಕಿದ ಕಲೆಂಡರ್ ನೋಡಿಪ್ಪೋಂ. ಆತರ ಹಲವಾರು ಸಂದೇಶ ಭಗವದ್ ಗೀತೆಲಿ ಇದ್ದು. ಇಂತಾದ್ದು ಒಂದೇ ಹೇಳಿ ಅಲ್ಲ. ಅರ್ಜುನ ಕೃಷ್ಣನ ಮಾತಿಲ್ಲಿ ನಮ್ಮ ಜೀವಿತದ ಹಲವಾರು ವಿಷಯಂಗೊ ಕಾಂಬಲಕ್ಕು.
ಅದರಲ್ಲಿ ಒಂದನೇ ಅಧ್ಯಾಯ ಓದಿದ ಎನಗೆ ತೋರಿದ ಮುಖ್ಯ ಸಾರ ಆನಿಲ್ಲಿ ಬರವದು.
ನಮ್ಮ ಬೇಕಾದವು - ಮನೆಯವೋ, ಬನ್ದುಗಳೋ, ನಮ್ಮ ಚಡ್ಡೀ ದೋಸ್ತುಗಳೋ, ಪರಿಚಯ ಇಪ್ಪವೋ, ಒಂದೇ ಸಂಸ್ಥೆಲಿ ಕೆಲಸ ಮಾಡುವವೋ ಆಗಲಿ ಸಮಾಜಕ್ಕೆ ದೋಷಕರವಾದ ಅಧಾರ್ಮಿಕ ಕೆಲಸಂಗಳ ಮಾಡುತ್ತವು ಹೇಳಿದ್ದರೆ ನಾವು ಅವಕ್ಕೆ ಸಲಹೆ  ಕೊಡುಲಾಗ. ಇದು ಇಂದು ಭಾರತಲ್ಲಿ ಮುಖ್ಯವಾಗಿ ನಡವ ಒಂದು ವಿಷಯ. ತಪ್ಪು ಮಾಡುವವು ಮೋಸ ಮಾಡುವವು ನಮ್ಮ ಜಾತಿ, ಪಾರ್ಟಿ ಇತ್ಯಾದಿ ಬಂದಂಗಳಲ್ಲಿಪ್ಪವಾದರೆ ನಾವು ಅದರ ಕಂಡಿದಿಲ್ಲೆ ಕೇಳಿದ್ದಿಲ್ಲೆ ಹೇಳಿ ಭಾವಿಸುವದೇ ವಿಷಯ. ಈ ಸಂಗತಿಗೆ ದೇವರು ತುಂಬಾ ಖಂಡನೆ ಮಾಡಿದ್ದವು. ಹಾಂಗೆ ಇಪ್ಪವರೊಟ್ಟಿಂಗೆ ಒಂದರಿಯುದೇ ದೇವರ ಕೃಪೆ ಇರ ಹೇಳಿ ಭಗವದ್ ಗೀತೆಲಿ ದೇವರು ತಿಳಿಶುವದು. ಸಮಾಜಕ್ಕೆ ಮೋಸ ಅಪ್ಪಂಥಾ ಸಂಗತಿಗಳ ಮಾಡುವವರ ದೇವರು ಆತತಾಯಿನಃ ( ತುಂಬಾ ಪಾಪಿಷ್ಛರು) ಹೇಳಿ ದಿನುಗೋಳಿದ್ದವು. ಆದ್ದರಿಂದ ಇದು ನಾವು ಗೀತೆಯೆ ಒಂದನೇ ಸಾರವಾಗಿ ತೆಕ್ಕೊಳ್ಳೆಕ್ಕು. ಸಮಯ ಸನ್ದರ್ಭೋಚಿಕತವಾಗಿ ಯುಕ್ತಿಸಹವಾಗಿ ಈ ಸಂಗತಿಯ ಆಲೋಚನೆ ಮಾಡಿ ಪ್ರವರ್ತಿಸುದೇ ನವಗೆ ಶ್ರೇಯಸ್ಕರ. ಸಮಾಜಲ್ಲಿ ಅಪ್ಪ ತಪ್ಪುಗಳ ತಿದ್ದೆಕ್ಕಾದರೆ ನವಗದಕ್ಕಿಪ್ಪ ಶಕ್ತಿ ಸುರುವಿಂಗೆ ಬೇಕು. ಅದಕ್ಕೆ ನಾವೆಲ್ಲಾ ಅರ್ಜುನನ ಹಾಂಗೆ ಕಾಯ ಮನೋ ಬಲಂಗಳಿಂದ ತಪಸ್ಸಿನಿಂದ ಬಲವಂಥರಾಯೆಕ್ಕು. ಮಹಾಭಾರತ ಯುದ್ದದ ಮದಲೇ ಅರ್ಜುನ ಹಲವಾರು ವಿದ್ಯೆಗಳ ಕಲುತ್ತು, ಶಿವದೇವರ ತಪಸ್ಸಿಂದ ಒಲಿಸಿ ಪಾಶುಪತಾಸ್ತ್ರ ಪಡದ್ದದೆಲ್ಲಾ ಇಲ್ಲಿ ನವಗೆ ಅನುಕರಣೀಯ. ಜೀವಿತ್ಲಲಿ ಏವಗಾದರುದೇ ಧರ್ಮಾಧರ್ಮ ವಿವೇಚನೆ ನವಗುದೇ ಮಾಡೆಕ್ಕಕ್ಕು ಹೇಳಿ ನೆಂಪಿಲ್ಲಿ ಮಡಗಿ ಕಠಿನವಾದ ತಪಸ್ಸು ಮಾಡುವದೇ ನಮ್ಮ ಸುರುವಾಣ  ಕೆಲಸ.
ಶುಭವಾಗಲಿ

Tuesday, August 27, 2013

ದೇವರ ಮಾತು ಹತ್ತನೇ ಅಧ್ಯಾಯ tenth chapter of Bhagavad Gita in HaviGannada (S)



ದೇವರ ಮಾತು ಹತ್ತನೇ ಅಧ್ಯಾಯ
10.1 ಗಟ್ಟಿಮುಟ್ಟಾದ ಕೈಗೊ ಇಪ್ಪ ಅರ್ಜುನಾ, ಪ್ರೀತಿ ಇಪ್ಪನಾದ ನಿನಗೆ ಒಳ್ಳೆದಾಯೆಕ್ಕು ಹೇಳಿ ತೋರುವದರಿಂದ ಇನ್ನು ಕೆಲವು ಮುಖ್ಯವಾದ ಸಂಗತಿಗಳ ನಿನಗೆ ಕಲಿಶುತ್ತೆ, ಗವನಮಾಡಿ ಕೇಳು.
10.2 ಎನ್ನ ಸುರುವಿನ ಬಗ್ಗಿಪ್ಪ ತಿಳುವಳಿಕೆ ದೇವರ್ಗೊಕ್ಕು ಇಲ್ಲೆ ತಪಸ್ಸು ಮಾಡುವನ್ಥಾ ಋಷಿಗೊಕ್ಕುದೆ ಇಲ್ಲೆ, ಎಂತಾಳಿದರೆ ಆನು ಅವಕ್ಕೆಲ್ಲಾ ಮದಲೆ ಇಲ್ಲಿಪ್ಪವ.
10.3 ಆನು ಹುಟ್ಟದ್ದವನುದೇ, ಸುರುವಿಲ್ಲದ್ದವನುದೇ ಲೋಕಕ್ಕೆಲ್ಲಾ ದೇವರುದೇ ಆಗಿದ್ದೆ. ಹೀಂಗಿಪ್ಪ ಎನ್ನ ಸಂಗತಿಯ ತಿಳುದಿಪ್ಪ, ಮನುಷ್ಯರಲ್ಲಿ ತಪ್ಪುತಿಳುವಳಿಕೆ ಇಲ್ಲದ್ದವನಾದ ಒಬ್ಬ ಎಲ್ಲಾ ಪಾಪಂಗಳಿಂದಲುದೇ ಬಚವಾವುತ್ತ.
10.4,10.5 ಜೀವಿಗೊಕ್ಕೆ ಮುಂದೆ ಹೇಳುವಂಥಾ ಎಲ್ಲಾ ಭಾವಂಗಳುದೇ ಎನ್ನಿಂದಲೇ ಸಿಕ್ಕುವದು. ಅದೇವದೆಲ್ಲಾ ಹೇಳಿದರೆ ಬುದ್ದಿ, ಗೊಂತುಮಾಡುವ ಶೇಷಿ, ತಪ್ಪಲ್ಲದ್ದ ತಿಳುವಳಿಕೆ, ಕಾವಲಿಪ್ಪ ಶಕ್ತಿ (ಕ್ಷಮೆ), ಇಪ್ಪದರ ಮಾಂತ್ರ ಹೇಳುವ ಶಕ್ತಿ (ಸತ್ಯ), ಕಣ್ಣು ಕಾಲುಗಳ ನಿಯಂನ್ತ್ರಿಸುವ ಶಕ್ತಿ (ದಮ), ಮನಸ್ಸಿನ ಅಡಗಿಸಿಮಡುಗುವ ಶಕ್ತಿ (ಶಮ), ಸೌಖ್ಯವಾಗಿಪ್ಪ ರೀತಿ (ಸುಖ), ಬೇಜಾರು (ದುಃಖ), ಮಾಡುಲಿಪ್ಪ ಶಕ್ತಿ (ಭವ), ಇಲ್ಲದ್ದೆ ಮಾಡುವ ಶಕ್ತಿ (ಅಭಾವ), ಹೆದರಿಕೆ, ಧೈರ್ಯ, ಬೇರಾರನ್ನುದೆ ಉಪದ್ರಮಾಡದ್ದ ರೀತಿ (ಅಹಿಂಸೆ), ಎಲ್ಲೋರನ್ನುದೇ ಒಂದೇ ಹಾಂಗೆ ನೋಡುವ ರೀತಿ (ಸಮತ್ವ), ಆಗಾಗ ಸಿಕ್ಕುದರಲ್ಲಿ ಸನ್ತೋಷ (ತುಷ್ಟಿಃ), ಕಠಿನಾಧ್ವಾನ ಮಾಡುಲಿಪ್ಪ ಶಕ್ತಿ (ತಪಸ್ಸು), ತನ್ನತ್ತರಿಪ್ಪ ವಸ್ತುಗಳ ಅದು ನಿಜವಾಗಿ ಬೇಕಾದವಕ್ಕೆ ಕೊಡುವದು (ದಾನ), ಒಳ್ಳೆ ಹೆಸರು (ಸತ್ಕೀರ್ತಿ), ಹಾಳು ಹೆಸರು (ದುಷ್ಕೀರ್ತಿ), ಹೀಂಗಿಪ್ಪ ಹಲವಾರು ಗುಣಂಗೊ ಎಲ್ಲಾ ದೇವರತ್ತರಿಂದಲೇ ಜೀವಿಗೊಕ್ಕೆ ಸಿಕ್ಕುವದು.
10. 6 ಜಮದಗ್ನಿ, ವಸಿಷ್ಠ, ಕಾಶ್ಯಪ ಇತ್ಯಾದಿ ಏಳು ಋಷಿಗಳುದೇ, ಸನಕ, ಸನನ್ದ, ಸನತ್ಕಾರ, ಸನಾತನ ಹೇಳಿ ನಾಕು ಮುನಿಕಳುದೆ, ಮನು ಇತ್ಯಾದಿ ರಾಜಂಗಳುದೇ ಎಲ್ಲಾ ಎನ್ನತ್ತರಿಂದಲೇ ಬನ್ದದು. ಈಗ ಇಪ್ಪ ಮನುಷ್ಯರೆಲ್ಲಾ ಅವರಿಂದ ಆದ ಪರಂಪರೆಯೇ.
10.7 ಈ ಹೇಳಿದಂಥಾ ಎನ್ನಿಂದಲೇ ಬನ್ದಂಥಾ ಸುರುವಾಣ ಮನುಷ್ಯರನ್ನುದೇ (ವಿಭೂತಿಗೊ), ಆನು ತಿಳಿಶಿದಂಥಾ ಗುಣಂಗಳನ್ನುದೇ  (ಯೋಗಂಗೊ) ಸರಿಯಾಗಿ ಆರು ಗೊಂತು ಮಾಡುತ್ತನೋ ಅವ ಒಂದರಿಯುದೇ ಆಡದ್ದಂಥಾ ಯೋಗಲ್ಲಿ  ಸೇರಿದವನಾವುತ್ತ.
10.8 ಬುದ್ಧಿವಂತರಾಗಿಪ್ಪವು ಆನು ಎಲ್ಲದರದ್ದುದೇ ಒರತೆ, ಎನ್ನಲ್ಲಿಯೇ ಎಲ್ಲಾ ನೆಲೆ ನಿಂದುಗೊಂಡಿಪ್ಪದು ಹೇಳಿ ತಿಳುದು ಪ್ರೀತಿಯಿಂದ ಎನ್ನ ಪೂಜೆ ಮಾಡುತ್ತವು.
10.9 ಎನ್ನನ್ನೇ ಮನಸ್ಸಿಲ್ಲಿ ಗ್ರೇಶಿಗೊಂಡು (ಗ್ರೇಶಿಸುತ್ತಾ) ಎನ್ನಲ್ಲಿಯೇ ಜೀವ ಬಿಡ್ಡುಗೊಂಡು ಬಹ್ಹಂಗೊಂಬ್ಬ ಬೋಧನೆ ಮಾಡುತ್ತಾ ಎನ್ನ ಕಥೆಗಳನ್ನೇ ದಿನನಿತ್ಯಾ ಹೇಳುತ್ತಾ ಸಂತೋಷವಾಗಿ ಜೀವಿಸುತ್ತವು.
10.10 ಏವಗಳುದೇ ಎನ್ನತ್ತರೆ ಸಂಪರ್ಕ ಮಡಿಕ್ಕೊಂಡು ಪ್ರೀತಿಯಿಂದ ಭಜಿಸುವ ಅವಕ್ಕೆ ಆನು ಒಪ್ಪಬುದ್ದಿಯ ಕೊಡುತ್ತೆ. ಆ ಒಪ್ಪ ಬುದ್ದಿಂದಲಾಗಿ ಅವಕ್ಕೆ ಎನ್ನತ್ತರಂಗೆ ಬಪ್ಪಲೆಡಿತ್ತು. (ಎನ್ನತ್ತರಂಗೆ ಬಪ್ಪಲೆಡಿವಂಥಾ ಒಪ್ಪಬುದ್ದಿಯ ಆನು ಅವಕ್ಕೆ ಕೊಡುತ್ತೆ)
10.11  ಹಾಂಗೆ ಜೀವಿಸುವ ಅವರತ್ತರೆ ಅನುಕಂಪೆ ಇಪ್ಪದರಿಂದಲಾಗಿ ಅವರ ಬುದ್ದಿಲಿ ಆನೇ ಒಂದು ಒಳ್ಳೆ ಬೆಣುಚ್ಚಿಇಪ್ಪ ತಿಳುವಳಿಕೆಯ ದೀಪದಾಂಗೆ ಇದ್ದುಗೊಂಡು ಅವಕ್ಕೆ ತಿಳುವಳಿಕೆ ಇಲ್ಲದ್ದದರಿಂದಲಾಗಿ ಬಪ್ಪ ಕಸ್ಥಲೆಯ (ಇಲ್ಲಿ ಕಸ್ಥಲೇ ಹೇಳಿದರೆ ಜೀವಿತ ಹೇಳಿ ಶಂಕರಾಚಾರ್ಯರು) ಇಲ್ಲದ್ದಾಂಗೆ ಮಾಡುತ್ತೆ.
ಅರ್ಜುನ ಹೇಳಿದಙ್
10.12-13  ನೀನು ತುಂಬಾ ದೊಡ್ಡ ದೇವರು ನೀನು ಕಡೇಯಾಣ ಆಶ್ರಯ ಪವಿತ್ರವಾದವ ತುಂಬಾ ಮೇಲಾಣ ತತ್ವವೆ. ತುಂಬಾ ಬಾಳತನ ಇಪ್ಪವನುದೇ ವಿಶಿಷ್ಟವಾದವನುದೇ ಸುರುವಾಣ ದೇವರುದೇ ಹುಟ್ಟದ್ದವನುದೇ ಎಲ್ಲಾಜಾಗೆಲಿಯೂ ಇಪ್ಪವನುದೇ ಹೇಳ್ಯೆಲ್ಲಾ ಎಲ್ಲಾ ಋಷಿ ದೇವಋಷಿಯಾದ ನಾರದಂದೆ ಅಸಿತಂದೆ ದೇವಲಂದೆ ವ್ಯಾಸಂದೆ ಈಗ ನೀನು ಸ್ವಯವುದೇ ಹೇಳುತ್ತಿದ್ದೆ.
10.14 ನೀ ಹೇಳುವ ಈ ಸಂಗತಿಯೆಲ್ಲಾ ನಿಜವೇ ಹೇಳಿ ಆನು ಸಿಶ್ಚಯಿಸುತ್ತಾ ಇದ್ದೆ. ದೇವರ್ಕ್ಕಗೋ ರಾಕ್ಷಸಂಗಕ್ಕೋ ನಿನ್ನ ನಿಜವಾದ ಸತ್ಯ ಗೊಂತಿಲ್ಲೆ.
10.15 ದೇವರ್ಕ್ಕೊಗೆ ದೇವರಾದ, ಬದಲಿಗೊಂಡಿಪ್ಪಂಥಾ ಲೋಕದ ಆಡಳಿತೆ ಮಾಡುವವನಾದ, ಇಪ್ಪದರ ಎಲ್ಲಾ ದೇವರಾದ, ಇಪ್ಪದರ ಎಲ್ಲ ಉಂಟು ಮಾಡಿದವನಾದ ಪುರುಷೋತ್ತಮಾ ನಿನ್ನ ಬಗ್ಗೆ ನಿನಗೇ ಗೊಂತು.
10.16 ಯಾವದೆಲ್ಲಾ ಪ್ರತ್ಯೇಕ ರೂಪಂಗಳ ಧರಿಸಿಗೊಂಡು ಸೀನು ಈ ಲೋಕಲ್ಲಿ ಇಪ್ಪದೂ ಹೇಳಿಪ್ಪ ಸಂಗತಿಯ ನೀನು ಎನಗೆ ಒಂದರಿ ಹೇಳಿಕೊಡೆಕ್ಕು. ಆ ಸಂಗತಿಯ ಈಡೀ ಹೇಳಿ ಕೊಡೆಕ್ಕು.
10.17 ಎಲ್ಲಾ ಹೊಂದಿಗೊಂಡಿಪ್ಪವನಾದ ಎ ಕಿಟ್ಟಣ್ಣಾ, ನಿನ್ನ ಏವಗಳುದೇ ಮನಸ್ಸಿಲ್ಲಿ ಎವದೆಲ್ಲಾ ರೂಪಂಗಳಲ್ಲಿ ಎನಗೆ ಗ್ರೇಶುಲಕ್ಕು ಹೇಳಿ ಕಲಿಶೆಕ್ಕು.
10.18 ನಿನಗೆಂತೆಲ್ಲಾ ಬಲ ಇದ್ದು ಹೇಳುವದರನ್ನುದೇ ನೀನೇವದೆಲ್ಲಾ ವಿಶೇಷ ರೂಪಲ್ಲಿಪ್ಪದೂ ಹೇಳುವದರನ್ನುದೇ ಬಿಡೂಸೀ ಹೇಳು ಆನು ಕೇಳುತ್ತೆ. ಅದು ಕೇಳದ್ದೆ ಎನಗೆ ತೃಪ್ತಿ ಆವುತ್ತಿಲ್ಲೆ.
ದೇವರು ಹೇಳಿದವು
10.19 ಸರಿ ಹೇಳುತ್ತೆ. ಕೆಲವು ಮುಖ್ಯವಾದದರ ಮಾಂತ್ರ ಹೇಳುತ್ತೆ ಅಲ್ಲದ್ದೆ ಎಲ್ಲವೂ ಹೇಳುಲೆ ನಿಂದರೆ ಅದು ಮುಗಿವದೂ ಹೇಳಿ ಇಲ್ಲೆ.
10.20 ಒಪ್ಪಕುಂಞ್ಞಿಯಾಗಿ ಕೇಳುವವನೇ, ಎಲ್ಲಾ ಜೀವಂಗಳ ಒಳಗೂ ಇಪ್ಪ ಆತ್ಮ ಆನೇ ಬೇರೆ ಆರೂ ಅಲ್ಲ. ಜೀವಿಗಳ ಸುರುವುದೆ ಆನೇ, ನಡುವುದೆ ಆನೇ, ಕಡೆಯುದೇ ಆನೇ.
10.21 ಹನ್ನೆರಡು ಆದಿತ್ಯಂಗಳಲ್ಲಿ ಆನು ವಿಷ್ಣ ಹೇಳಿ ಹೆಸರಿಪ್ಪ ಆದಿತ್ಯ. ಬೆಣುಚ್ಚಿ ಇಪ್ಪ ವಸ್ತುಗಳಲ್ಲಿ ಕಿರಣಂಗೊ ಇಪ್ಪ ರವಿ ಆನೇ. ಎಳು ಮರುತ್ತುಗಳಲ್ಲಿ ಆನು  ಮರೀಚಿ. ಇರುಳಪ್ಪಗ ಆಕಾಶಲ್ಲಿ ಮಿಣಿ ಮಿಣಿ ಹೇಳಿ ಬೆಣುಚ್ಚಿ ಕೊಡುವ ವಸ್ತುಗಳಲ್ಲಿ ಆನು ಬಂದ್ರಙ್. 
    10.22 ವೇದಂಗಳಲ್ಲಿ ಆನು ಸಾಮವೇದ, ದೇವರುಗಳಲ್ಲಿ ಆನು ಇಂದ್ರಙ್, ಶರೀರೀವಯವಂಗಳಲ್ಲಿ ಆನು ಮನಸ್ಸು, ಜೀವಿಗಳಲ್ಲಿ ಗೊಂತುಮಾಡುವಂಥಾ ಶಕ್ತಿ ಆನು.
10.23 ರುದ್ರಂಗಳಲ್ಲಿ ಆನು ಶಂಕರಙ್, ಯಕ್ಷ ರಕ್ಷಸ್ಸು ವರ್ಗದ ಜೀವಿಗಳಲ್ಲಿ ಆನು ಕುಬೇರಙ್, ಎಂಟು ವಸುಗೊ ಇಪ್ಪದರಲ್ಲಿ ಆನು ಅಗ್ನಿ , ಕುತ್ತಕ್ಕಿಪ್ಪ ಗುಡ್ಡೆಗಳಲ್ಲಿ ಆನು ಮೇರು ಪರ್ವತ.
10.24 ಪುರೋಹಿತರಲ್ಲಿ ಮುಖ್ಯನಾದ ವಸಿಷ್ಠ ಆನೇ. ಸೇನಾನಿಗಳಲ್ಲಿ ಆನೇ ಶಿವನ ಮಗನಾದ ಸ್ಕಂದ. ನೀರು ತುಂಬಿಗೊಂಡಿಪ್ಪ ಹಳ್ಳಂಗಳಲ್ಲಿ ಸಮುದ್ರ ಆನೇ ಆಗಿದ್ದೆ.
10.25 ಮಹಾಋಷಿಗಳಲ್ಲಿ ಭೃಗು ಮಹರ್ಷಿ ಆನೇ, ಭಾಷೆಯ ಪದಂಗಳಲ್ಲಿ ಓಂ ಕಾರ ಪದ ಆನೇ, ಯಜ್ಢಂಗಳಲ್ಲಿ ಮನ್ತ್ರ ಜಪ  ಎಂಬ ಯಜ್ಞ ಆನೇ, ಗುಡ್ಡೆಗಳ್ಲಲಿ ಹಿಮಾಲಯ ಆನೇ ಆಗಿದ್ದೆ.
10.26 ಎಲ್ಲಾ ಮರಂಗಳಲ್ಲಿಯೂ ಮುಖ್ಯವಾದ ಅಶ್ವತ್ಥ ಆನೇ, ದೇವ ಋಷಿಗಳಲ್ಲಿ ನಾರದ ಆನೇ, ಗಂಧರ್ವಂಗಳಲ್ಲಿ ಚಿತ್ರರಥಙ್ ಆನೇ, ಸಿದ್ದಂಗಳಲ್ಲಿ ಕಪಿಲ ಮುನಿ ಆನೇ ಆಗಿದ್ದೆ.
10.27 ಕುದುರೆಗಳಲ್ಲಿ ಅಮೃತ ಮಥನದ ಸಮಯ ಮೂಡಿ ಬಂದ ಉಚ್ಛೈಶ್ರವಸ್ಸು ಆನೇ, ಆನೆಗಳಲ್ಲಿ ಐರಾವತ ಆನೇ. ಮನುಷ್ಯರಲ್ಲಿ ಅವರ ನೇತೃಸ್ಥಾನದಲ್ಲಿಪ್ಪವನು ಆನೇ.
10.28 ಆಯುಧಂಗಳಲ್ಲಿ ವಜ್ರುಯುಧ ಆನೇ, ದನಗಳಲ್ಲಿ ಆನೇ ಕಾಮಧೇನು. ಮಕ್ಕಳ ಹುಟ್ಟುಸುಲಿಪ್ಪ ವಿವಿಧ ಸಹಾಯಕರವಾದ ಸಂಗತಿಗಳಲ್ಲಿ ಕಾಮದೇವ ಆನೇ. ಸರ್ಪಂಗಳಲ್ಲಿ ವಾಸುಕಿ ಆನೇ.
10.29 ನಾಗಂಗಳಲ್ಲಿ ಅನಂತ ಆನೇ. ನೀರಲ್ಲಿಪ್ಪವರಲ್ಲಿ ಆನೇ ವರುಣ. ಪಿತೃಗಳಲ್ಲಿ ಅರ್ಯಮಾ ಹೇಳುವವನು ಆನೇ. ಶಿಕ್ಷೆಮಾಡುವದರಲ್ಲಿ ಆನೇ ಯಮ.
10.30 ದೈತ್ಯಂಗಳಲ್ಲಿ ಪ್ರಹ್ಳಾದ ಆನೇ. ಲೆಕ್ಕ ಹಾಕುಲೆ ಉಪಯೋಗಿಸುವ ಕೆಣಿಗಳಲ್ಲಿ ಆನೇ ಸಮಯ. ಮೃಗಂಗಳಲ್ಲಿ ಸಿಂಹ ಮತ್ತೆ ಹಕ್ಕಿಗಳಲ್ಲಿ ಗರುಡ ಆನೇ ಆಗಿದ್ದೆ.
10.31 ತೊಳವ ವಸ್ತುಗಳಲ್ಲಿ ಗಾಳಿ ಆನೇ. ಆಯುಧ ಹಿಡಿವವರಲ್ಲಿ ರಾಮ ಆನೇ. ಮೂನುಗಳಲ್ಲಿ ಮಕರ ಮೀನು ಆನೇ. ಒರತೆಗಳ ಎಡೆಲಿ ಗಂಗಾನದಿ ಆನೇ.
10.32 ಪ್ರಪಂಚ ಸುರು ಆಗಿ ನೆಲೆ ನಿಂಬ ಸಂಗತಿಗೆ ಸರ್ಗ ಹೇಳಿ ಹೆಸರು. ಆ ಸರ್ಗದ ಸುರುವುದೆ ನಡುವುದೆ ಕಡೇಯುದೆ ಆನೇ. ತಿಳುವಳಿಕೆಗಳಲ್ಲಿ ಆತ್ಮದ ಬಗ್ಗಿಪ್ಪ ತಿಳುವಳಿಕೆ, ಅತ್ತೆ ಇತ್ತೆ ಸಂಗತಿಗಳ ಹೇಳಿ ಹೋಂಟಿ ಹೋರುದರಲ್ಲಿ ವಾದ ಹೇಳುವ ಸಂಗತಿ ಆನೇ.
10.33 ಅಕ್ಷರಂಗಳಲ್ಲಿ ಅಕಾರ ಆನೇ. ಸಮಾಸಂಗಳ ಎಡೆಲಿ ದ್ವಂದ್ವ ಆನೇ. ಹಾಳಾಗದ್ದದರಲ್ಲಿ ಕಾಲ ಆನೇ. ಕೆಲಸಂಗಳ ಫಲ ಕೊಡುವದರಲ್ಲಿ ನಾಕು ಮೋರೆ ಇಪ್ಪ ಬ್ರಹ್ಮನುದೇ ಆನೇ ಆಗಿದ್ದೆ.
10.34 ಎಲ್ಲಾ ಹಾಳುವಾಡುವದರಲ್ಲಿ ಮರಣ ಆನೇ. ಉಂಟು ಮಾಡುವದರಲ್ಲಿ ಹುಟ್ಟು ಹೇಳುವ ಸಂಗತಿ ಆನೇ. ಸ್ತ್ರೀ ಲಂಗ ಪದಂಗಳಲ್ಲಿ ಕೀರ್ತಿ, ಶ್ರೀ, ವಾಕ್ ಹೇಳುವ ಪದ, ಸ್ಮೃತಿ , ಮೇಧಾ, ಧೃತಿ, ಕ್ಷಮಾ ಇತ್ಯಾದಿ ಸ್ತ್ರೀ ಲಿಂಗ ವಚನಂಗಳುದೇ ಆನೇ.
10.35 ಸಾವವೇದಲ್ಲಿಪ್ಪ ಪದ್ಯಂಗಳಲ್ಲಿ ಬೃಹತ್ ಸಾಮ ಹೇಳಿ ಹೆಸರಿಪ್ಪ ಪದ್ಯ ಆನೇ. ವೇದ ಮಂತ್ರಂಗಳ ಫಟಿಸಿದ ರೀತಿಗಳಲ್ಲಿ ಗಾಯತ್ರೀ ಛಂದಸ್ಸು ಆನೇ.
10.36 ಅತ್ತೆ ಇತ್ತೆ ಮೋಸಮಾಡುವ ರೀತಿಗಳಲ್ಲಿ ಜೂಜಾಟ ಆನೇ. ಒಳ್ಳೆ ತೇಜಸ್ಸಿಪ್ಪವರ ತೇಜಸ್ಸು ಆನೇ. ಗೆಲ್ಲು ಆನೇ. ಕಠಿನಾಧ್ವಾನ ಮಾಡುವವರ ಅಧ್ವಾನವುದೇ ಆನೇ. ಒಳ್ಳೆ ಜನಂಗಳ ಒಳ್ಳೆ ಗುಣವುದೇ ಆನೇ.
10,37  ಯಾದವಕುಲದವರಲ್ಲಿ ಆನೇ ಶ್ರೀ ಕೃಷ್ಣ. ಪಾಣ್ಡವರಲ್ಲಿ ಅರ್ಜುನ ಆನೇ. ವೇದವ ಮನನ ಮಾಡುವ ಹವ್ಯಾಸ ಇಪ್ಪವರಲ್ಲಿ ಆನೇ ವೇದವ್ಯಾಸ. ಕವಿಗಳ್ಲಲಿ ಉಶನಸ್ಸು ಹೇಳಿ ಹೆಸರಿಪ್ಪ (ಶುರ್ಕಾಚಾರ್ಯ ಆಡ) ಕವಿಯುದೇ ಆನೇ.
10.38 ಶಿಕ್ಷೆಗಳಲ್ಲಿ ದಣ್ಡ ಶಿಕ್ಷೆ ಆನೇ. ಜಯಿಸುಲೆ ಆಗ್ರಹಿಸುವವರಲ್ಲಿಪ್ಪ ನೀತಿಬೋಧವು ಆನೇ. ಗುಟ್ಟು ಮಡಿಕ್ಕೊಂಡಿಪ್ಪವರ ಮೌನವಪದೇ ಆನೇ. ತಿಳುವಳಿಕೆ ಇಪ್ಪವರ ತಿಳಿವುದೆ ಆನೇ.
10.39 ಎಲ್ಲಾ ಜೀವಿಗಳದ್ದುದೇ ಬುತ್ತು ಎವದೋ ಅದು ಆನೇ ಅರ್ಜುನಾ. ಹಂದುದೂ ಹಂದ್ದದ್ದದೂ ಆಗಿಪ್ಪ ಎಂತೆಲ್ಲಾ ಇ ಲೋಕಲ್ಲಿದ್ದೋ ಆನಿಲ್ಲದ್ದೆ ಅದಿಲ್ಲೆ ಹೇಳಿ ನಿನಗೆ ತಿಳುಕ್ಕೊಂಬಲಕ್ಕು.
10.40 ಇದೆಲ್ಲಾ ನಿನಗೆ ಗೊಂತಪ್ಪಲೇ ಹೇಳಿ ಸಣ್ಮವಾಗಿ ಆನೀಗ ಹೇಳಿದ್ದದು. ಎನ್ನ ವಿಶೇಷವಾದ ರೂಪಂಗೊಕ್ಕುದೇ ಅವತಾರಂಗೊಕ್ಕುದೇ ಅಳತೆಯೇ ಇಲ್ಲೆ.
10.41 ಯಾವದೆಲ್ಲಾ ಗೆಲವಿಪ್ಪದಾಗಿ ತುಂಬಾ ವಿಶೇಷವಾಗಿ ಇದ್ದೋ ಅದೆಲ್ಲಾ ಎನ್ನದ್ದೇ ತೇಜಸ್ಸಿನ ಅಂಶಂದ ಆದ್ದದೂ ಹೇಳಿ ತಿಳಿವಲಕ್ಕು.
10.42 ಮತ್ತೆ ಇದರ ಬಗ್ಗೆಲ್ಲಾ ಹೆಚ್ಚು ಗೊಂತುಮಾಡಿಕ್ಕಿ ನಿನಗೆಂತಪ್ಪಲಿದ್ದು ಅರ್ಜುನಾ. ಎನ್ನ ಒಂದು ಅಂಶಂದ ಆನು ಈ ಜಗತ್ತಿನನ್ನೇ ಇಡೀ ಹಬ್ಬಿಗೊಂಡಿದ್ದೆ. (ದೇವರು ತನ್ನ ಒಂದಂಶಂದ ಜಗತ್ತಿನ ಬೇಕಾದಾಂಗೆ ಪರಿಪಾಲನೆ ಮಾಡುತ್ತವು)
ಹೀಂಗೆ ದೇವರ ಮಾತುಗಳ ಹತ್ತನೇ ಅಧ್ಯಾಯ ಇಲ್ಲಿಗೆ ಇಡೀ ಆತು.

Wednesday, August 14, 2013

ದೇವರ ಮಾತು - ಒಂಬತ್ತನೇ ಅಧ್ಯಾಯ 9th Chapter of The Divine Message



ದೇವರ ಮಾತು - ಒಂಬತ್ತನೇ ಅಧ್ಯಾಯ
ಒಳ್ಳೆಯವರಾದ  ದೇವರು ಹೇಳಿದವು
9.1 ಈಗ ಆನು, ಯಾವದರಲ್ಲಿಯೂ ತಪ್ಪಾದ ನೋಟ ಇಲ್ಲದ್ದವನಾದ ನಿನಗೆ ತುಂಬಾ ಗುಟ್ಟಾಗಿ ಇಪ್ಪ ತಿಳುವಳಿಕೆಯ ಹೇಳಿ ಕೊಡುತ್ತೆ ಆತಾ, ಈ ತಿಳುವಳಿಕೆ ನೀನು ಮಾಡಿ (ಆಚರಿಸಿ) ಅನುಭವಲ್ಲಿ ಗೊಂತುಮಾಡುವ ಹಾಂಗಿಪ್ಪದುದೇ ಕೂಡಾ. ಈ ಸಂಗತಿ ಕಲುತ್ತರೆ ಒಳ್ಳೆದಲ್ಲದ್ದ ಎಲ್ಲದರಿಂದಲೂ ನಿನಗೆ ಬಚವಪ್ಪಲಕ್ಕು.
9.2 ಈ ತಿಳುವಳಿಕೆ ಊಪಾಯಂಗೊಕ್ಕೆಲ್ಲಾ ಅರಸನಾದ ಉಪಾಯ, ಹಾಂಗೇ ಆರಿಂಗು ಹೆಚ್ಚಾಗಿ ಗೊಂತಿಲ್ಲದ್ದದುದೆ, ತುಂಬಾ ಚೊಕ್ಕವಾದ್ದದುದೆ, ಒಳ್ಳೆದುದೆ, ಅನುಭವನ್ದ ಸರಿಯಾಗಿ ಗೊಂತಪ್ಪಲೆ ಎಡಿವದುದೇ, ಧರ್ಮದ ದಾರಿಲಿ ನಿನ್ನ ನಡೆಸುವಂಥಾದ್ದುದೆ, ಮಾಡುಲೆ ಸುಲಾಭ ಇಪ್ಪದುದೆ ಹಾಂಗೇ ಒಂದರಿಯುದೇ ಬದಲುಸೆಕ್ಕಾಗದ್ದದುದೇ ಆದ ಉಪಾಯ.
(ಆದರೆ)
9.3 ತುಂಬ ಕಠಿನವಾಗಿ ಶ್ರಮಿಸುವನಾದ ಅರ್ಜುನಾ, ಈ ಉಪಾಯಲ್ಲಿ ಗವನ ಕೊಡದ್ದ ಮನುಷ್ಯರು ಎನ್ನ ಹೊಂದುಲೆಡಿಯದ್ದೇ ಸಾವು ಹುಟ್ಟುಗಳ ಮಧ್ಯಲ್ಲಿಪ್ಪಂಥಾ ಈ ಲೋಕಕ್ಕೆ ತಿರುಗಿ ತಿರುಗಿ ಬತ್ತಾ ಇರುತ್ತವು.
9.4 ಹೀಂಗೇ ಹೇಳಿ ವ್ಯಕ್ತವಲ್ಲದ್ದವನಾದ ಎನ್ನಿಂದಲೇ ಈ ಎಲ್ಲಾವುದೇ ತುಂಬಿಗೊಂಡಿದ್ದು. ಎನ್ನಲ್ಲಿಯೇ ಎಲ್ಲಾ ಜೀವಜಾಲವುದೇ ಇಪ್ಪದು ಹೊರತು ಆನು ಆ ಜೀವಜಾಲಂಗಳ ಒಳಗೆ ಇಪ್ಪದಲ್ಲ. (ಜೀವಜಾಲಂಗಳ ಒಳಗೆ ಅಥವಾ ಅವಗಳಲ್ಲಿ ದೇವರಿಪ್ಪದಾಗಿ ತೋರುದು ಸಹಜ ಆದರೆ ಹಾಂಗಲ್ಲ ಸಂಗತಿ ಹೇಳಿ ದೇವರು ಹೇಳುತ್ತವು)
9.5 ಎನಗೆ ಎಲ್ಲಾ ವಸ್ತುಗಳನ್ನುದೇ ವಿಶೇಷವಾದ ರೀತಿಲಿ ಎತ್ತಿಗೊಂಡಿಪ್ಪಲಿಪ್ಪ ಸಾಮರ್ಥ್ಯ ಇಪ್ಪದರ ನೀನು ಗೊಂತುಮಾಡೆಕ್ಕು. ಅದರಿಂದಲಾಗಿಯೇ ಒಂದು ಜನ್ತುವುದೇ ಎನ್ನಲ್ಲಿ ತಾಂಗಿ ನಿನ್ದದುಗೊಂಡಿಲ್ಲೆ, ಹಾಂಗೇ ಅದರ ಎಲ್ಲಾ ತಾಂಗಿಗೊಂಡು ಆನಿದ್ಗೆ. ಅದೇ ಕಾಲ ಆನಾ ಒಂದರನ್ನುದೇ ಎನಗೆ ತಾಂಗಾಗಿ ಮಾಡುತ್ತಾ ಇಲ್ಲೆ.
9.6 ಎಲ್ಲಾ ಜಾಗೆಲಿಯೂ ಬೀಸುತ್ತಾ ಇಪ್ಪ ಗಾಳಿ ಹೇಂಗೆ ಆಕಾಶಲ್ಲಿ ನಿಂದುಗೊಂಡಿದ್ದೋ ( ಆಕಾಶಕ್ಕೆ ಅಂಟಿಗೊಂಡಿಲ್ಲೆಯೋ) ಹಾಂಗೇ ಎಲ್ಲಾ ವಸ್ತುಗಳುದೇ ಜೀವಜಾಲವುದೇ ಎನ್ನಲ್ಲಿ ನಿಂದುಗೊಂಡಿಪ್ಪದು ಹೇಳಿ ನೀನು ತಿಳಿಯೆಕ್ಕದ.
9.7 ಕುಂತಿಯ ಮಗನೇ, ಒಂದು ಕಲ್ಪ ಹೇಳಿಪ್ಪ ಕಾಲ ವುಗಿವಗ ಎಲ್ಲಾ ವಸ್ತುಗಳುದೇ ಎನ್ನಲ್ಲಿ ಕರಡಿದಹಾಂಗಾವುತ್ತು. ಮತ್ತೆ ಸೃಷ್ಟಿಯ ಕಾಲಲ್ಲಿ ಕರಡಿದದ್ದರ ಎಲ್ಲಾ ತಿರುಗಿ ಅದಾದ್ದರ ರೂಪಲ್ಲಿ ಬದಲುಸಿ ಹೆರತತ್ತೆ.
9.8 ಎನ್ನ ಪ್ರಕೃತಿ ಅಥವಾ ಮಾಯಾ ಶಕ್ತಿಯಿಂದಲಾಗಿ ಮತ್ತು ಮತ್ತು ಈ ಜೀವಜಾಲಾದಿಗಳ ಸೃಷ್ಟಿ ಮಾಡುತ್ತಾ ಇರುತ್ತೆ.
9.9 ಆದರೆ ಎಂತದುದೇ ಮಾಡದ್ದವನಾಂಗೆ ಇಪ್ಪದರಿಂದ, ಆ ಸಂಗತಿಲಿ ಮನಸ್ಸಿನ ಅಂಟುಸಿಗೊಳ್ಳದ್ದಿಪ್ಪದರಿಂದ ಎನಗೆ ಆ ಕೆಲಸಂಗಳಿಂದಲಾಗಿ ಎಂತ ತೊಂದರೆಯೂ ಆವುತ್ತಿಲ್ಲೆ.
9.10 ಎನ್ನ ಶಕ್ತಿಯಾದ ಪ್ರಕೃತಿ (ಅಥವಾ ಮಾಯೆ) ಎನ್ನ ಮೇಲ್ನೋಟದಲ್ಲಿ ಹಂದುದುದೇ ಹಂದದ್ದದುದೇ ಆದ ಎಲ್ಲದರನ್ನುದೇ ಹುಟ್ಟುಸುತ್ತಾ ಬತ್ತು. ಕುನ್ತಿಯಮಗನೇ, ಈ ಕಾರಣಂದಲಾಗಿಯೇ ಲೋಕ (ಅಥವಾ ಜಗತ್ತು) ಮತ್ತು ಮತ್ತು ಬದಲಾವಣೆ ಹೊಂದುತ್ತಾ ಇಪ್ಪದು.
9.11 ಆನು ಎಲ್ಲಾ ವಸ್ತುಗೊಕ್ಕುದೇ ದೇವರಾಗಿಪ್ಪವ. ಆದರೆ ಸಾಧಾರಣವಾಗಿ ಬುದ್ದಿ ಕಮ್ಮಿ ಇಪ್ಪವು ಈ ನಿಜ ಗೊಂತಿಲ್ಲದ್ದೆ ಆನೊಂದು ಮನುಷ್ಯನಹಾಂಗೆ ಹೇಳಿ ತಪ್ಪಾಗಿ ವಿಚಾರಿಸುತ್ತವು.
9.12 ಪ್ರಯೋಜನವಿಲ್ಲದ್ದ ಆಸೆಗೊ ಇಪ್ಪವರಾಗಿ, ಪ್ರಯೋಜನವಿಲ್ಲದ್ದ ಕೆಲಸಂಗಳ ಮಾಡುವವಾಗಿ,ಪ್ರಯೋಜನವಿಲ್ಲದ್ದ ತಿಳುವಳಿಕೆ ಇಪ್ಪವಾಗಿ, ಒಳ್ಳೆ ಗುಣಂಗೊ ಇಲ್ಲದ್ದವಾಗಿ, ಗುಂಡಂಗಳ ಹಾಂಗುದೇ, ಬಯೋತ್ಪಾದಕರಾಂಗುದೆ ಜೀವಿತ ನಡೆಸಿಗೊಂಡು ಇಪ್ಪವರಾಗಿ ಇಪ್ಪವು ಅವು.
9.13 ಆದರೆ ಲಾಯಕ ಗುಣಂಗೊ ಎಲ್ಲಾ ಇಪ್ಪಂಥಾ ಒಳ್ಳೆ ಜನಂಗೊ, ಭಾರೀ ಒಳ್ಳೆ ರೀತಿಗಳ ಜೀವನದಲ್ಲಿ ಅವಲಂಬಿಸಿಗೊಂಡು ಎನ್ನನ್ನೇ ಗಟ್ಟಿಯಾಗಿ ಆಶ್ರಯಿಸಿಗೊಂಡು ಎಲ್ಲಾ ವಸ್ತುಗೊಕ್ಕುದೇ ಸುರುವಾಗಿಪ್ಪವನುದೇ, ಬದಲಾವಣೆ ಆಗದ್ದವನುದೇ, ಆದ ಎನ್ನ ಗೊಂತುಮಾಡಿ ಸೇವಿಸುತ್ತವು.
9.14 ಎನ್ನ ಮತ್ತು ಮತ್ತು ಹಾಡಿ ಹೊಗಳಿಗೊಂಡು ದೃಢನಿಶ್ಟಯಂಗಳ ಮಡಿಕ್ಕೊಂಡು ಅಧ್ವಾನಮಾಡಿಗೊಂಡು,ದಿನಸರಿ ಕೆಲವು ನಿಷ್ಠೆಗಳ ಜೀವಿತಲ್ಲಿ ಕೈಗೊಂಡು, ಭಕ್ತಿಯಿಂದ ದೇವರ (ಎನ್ನ) ಪೂಜೆ ಪುನಸ್ಕಾರಂಗಳ ಮಾಡಿಗೊಂಡು ಬತ್ತವು.
9.15 ಇನ್ನು ಕೆಲವು ಜನ ಎಲ್ಲಾ ರೂಪಲ್ಲಿಯೂ ಇಪ್ಪವನಾದ ಎನ್ನ ಹಲವಾರು ರೀತಿಯ ತಿಳುವಳಿಕೆಗಳ ಪಡವದು, ಕೊಡುವದು ಅಡಗುವ ಜ್ಞಾನಯಜ್ಞವ ಮಾಡಿ ಆರಾಧನೆ ಮಾಡುತ್ತವು. ಇನ್ನು ಕೆಲವು ಜನ ದೇವರುದೆ ಭಕ್ತನುದೇ ಲೋಕವುದೇ ಎಲ್ಲಾ ಒಂದೇ ಹೇಳಿಪ್ಪ ರೀತಿಲಿ ಆರಾಧಿಸ್ಸುತ್ತವು, ಮತ್ತೆ ಕೆಲವು ಜನ ಇದೆಲ್ಲಾ ಬೇರೆ ಬೇರೆ ಹೇಳುವ ರೀತಿಲಿ ಆರಾಧಿಸುತ್ತವು, ಇನ್ನೂ ಕೆಲವರು ದೇವರೇ ಬೇರೆ ಬೇರೆ ರೂಪಲ್ಲಿ ಬೇರೆ ಬೇರೆ ದೇವರ್ಕ್ಕಳಾಗಿ ಇದ್ದವು ಹೇಳುವ ಸಂಕಲ್ಪಲ್ಲಿ ಪೂಜೆ ಮಾಡುತ್ತವು.
9.16 ಆನೇ ವೇದೋಚ್ಚಾರಣೆಯಿಂದ ಮಾಡುವ ಯಾಗ ಹೋಮಾದಿಗೊ, ಆನೇ ಹಲವಾರು ಸಾಮುಹಿಕ ಕಾರ್ಯಕ್ರಮಂಗೊ,ಆನೇ ಪಿತೃಗೊಕ್ಕೆ ಮಾಡುವ ತಿಥಿ ಮುಂತಾದ್ದದುದೆ, ಜೀವಿಗೊಕ್ಕೆ ರೋಗಬಂದರೆ ಬದಲುಸುವ ಮದ್ದುದೇ ಆನೇ, ಮನ್ತ್ರವುದೇ ಆನೇ, ಆನೇ ತುಪ್ಪ, ಆನೇ ಕಿಚ್ಚು, ಹೋಮಸುವ ದ್ರವ್ಯವುದೇ ಆನೇ (ಎಲ್ಲಾ ವಸ್ತುಗಳುದೆ ಕಾರ್ಯಕ್ರಮಂಗಳುದೇ ಆನೇ ಹೇಳಿ ದೇವರು ತಿಳಿಶುವದು)
9.17  ಈ ಲೋಕದ ಅಪ್ಪ, ಅಮ್ಮ, ಅಜ್ಜ, ಬೆಳೆಸುವವ, ಎಲ್ಲಾ ಆನೇ. ಆನೇ ತಿಳಿಯೆಕ್ಕಾದ್ದದುದೇ ತುಂಬಾ ಸ್ವಚ್ಚವಾದ್ದದುದೇ (ಸ್ವಚ್ಚವಾಡುವ ಸೂರ್ಯಕಿರಣ, ನೀರು ಇತ್ಯಾದಿ ವಸ್ತುಗೆ ಎಲ್ಲಾ), ಓಂ ಕಾರವುದೇ, ಋಗ್ವೇದ, ಯಜುರ್ವೇದ, ಸಾಮವೇದ ಅಥರ್ವ ವೇದ ಇತಿಹಾಸ ಪುರಾಣ ಇದೆಲ್ಲವುದೇ ಆನೇ.
9.18  ಹೋಪ ದಾರಿಯದೇ, ಆಡಳಿತಗಾರನುದೇ, ಗುರಿಕ್ಕಾರನುದೇ, ನೋಡಿ ನಡೆಶುವವನುದೇ, ಮನೆಯುದೇ, ಆಶ್ರಯವುದ, ದೋಸ್ತುದೇ, ಸುರುವುದೇ, ಒಡೂಕವುದೇ, ಎಲ್ಲಾ ಹಾಳಾಗಿ ಹೊಪಜಾಗೆಯುದೇ, ಎವಗಳುದೇ ಬದಲದ್ದನ್ಥಾ ಬಿತ್ತುದೇ ಎಲ್ಲಾ ಆನೇ.
9.19 ಆನೇ ಸೂರ್ಯನಾಗಿ ಹೊತ್ತಿಗೊಂಡಿಪ್ಪದುದೇ ಬೆಶಿಮಾಡುದುದೇ, ಮಳೆಯ ಬರುಸುದುದೇ ಬಾರದ್ದಾಂಗೆ ತಡವದುದೇ ಆನೇ. ಸಾಯದ್ದದುದೇ ಆನೇ ಸಾವುದೇ ಆನೇ, ಲಾಯಕದ್ದುದೇ ಲಾಯಕಲ್ಲದ್ದದುದೇ ಆನೇ ಅರ್ಜುನಾ
9.20 ಯಾಗಾದಿಗಳ (ಸತ್ಕರ್ಮಂಗಳ) ಮಾಡುವವು ಅದರ ಮಾಡಿದ್ದರಿಂದಲಾಗಿ ಅವರ ಪಾಪ ಎಲ್ಲಾ ಇಲ್ಲದ್ದೆ ಆಗಿ ದೇವಲೋಕಕ್ಕೆ ಹೋಪಲೆ ಆಗ್ರಹಿಸುತ್ತವು. ಆ ದೇವಲೋಕಕ್ಕೆ ಹೋಗಿ ಬೇರೆ ಬೇರೆ ತರದ ಸನ್ತೋಷದ ಸಂಗತಿಗಳ ಅನುಭವಿಸುತ್ತವು.
9.20 ಅವು ವಿಶಾಲವಾದ ದೇವಲೋಕಲ್ಲಿಪ್ಪ ಸುಖವ ಎಲ್ಲೆ ಅನುಭವಿಸುವಗ ಪುಣ್ಯ ಕಮ್ಮಿಯಾವುತ್ತು. ಹಾಂಗೆ ಪುಣ್ಯ ಕಮ್ಮಿ ಅಪ್ಪಗ ಮತ್ತ ಮನುಷ್ಯರ ಲೋಕಕ್ಕೆ ಬತ್ತವು. ಹೀಂಗೆ ಸತ್ಕರ್ಮಂಗಳ ಮಾಡಿಗೊಂಡು ಹೋಗಿ ಬನ್ದು ಮಾಡುತ್ತಾ ಇರ್ತವು.
9.22 ಇದರ ಎಲ್ಲಾ ಮಧ್ಯಲ್ಲಿ ಆರು ಬೇರೆ ಆರ ಬಗ್ಗೆಯುದೇ ವಿಚಾರ ಮಾಡದ್ದೆ ಬಿಡುಗಡೆ ಇಲ್ಲದ್ದೆ ಎನ್ನ ಬಗ್ಗೇ ವಿಚಾರಿಸುತ್ತಾ ಉಪಾಸನೆ ಮಾಡುತ್ತವೋ ಹಾಂಗಿಪ್ಪ ಯಾವಾಗಳುದೇ ಎನ್ನೊಟ್ಟಿಂಗೇ ಇಪ್ಪವಕ್ಕೆ ಧನ ಮಾನ ಪದವಿ ಇತ್ಯಾದಿಗಳ ಕೊಟ್ಟುಗೊಂಡು ಅದರ ಸಂರಕ್ಷಣೆ ಮಾಡಿಗೊಂಡು ಆನೇ ಇರುತ್ತೆ.
9.23 ಇನ್ನು ಒಂದು ವಿಷಯ ಎಂತಾಳಿದರೆ, ಎನ್ನ ಅಲ್ಲದ್ದೆ ಬೇರೆ ದೇವರ್ಕ್ಕಳ ಶ್ರದ್ದೆಯಿಂದ ಆರಾಧನೆ ಮಾಡುವವುದೆ ಸೀದ ಆಲ್ಲದ್ದರದೇ ಬಳಂಕಿದ  ದಾರಿಲಿ (ಸುತ್ತಿಬಪ್ಪಾಂಗೆ) ಎನ್ನನ್ನೇ ಪೂಜೆ ಮಾಡುವದು. (ಸರಿಯಾದ ವಿಧಿಯಲ್ಲದ್ದೇ)
9.24 ಎಲ್ಲಾ ವಿಧ ಪೂಜೆ ಪುನಸ್ಕಾರ ಆರಾಧನೆಗಳದ್ದುದೇ ಆಡಳಿತಗಾರ ಆನೇ ಆ ಪೂಜೆಗಳ ಸ್ವೀಕರಿಸುವದುದೇ ಆನೇ, ಆದರೆ ಸರಿಯಾದ ರೀತಿಲಿ ಎನ್ನ ಗೊಂತಿಲ್ಲದ್ದದರಿಂದಲಾಗಿ ಅವಕ್ಕೆ ಮೋಕ್ಷದ ದಾರಿನ್ದ ಜಾರಿ ಹೋಗೆಕ್ಕಾಗಿ ಬತ್ತು.
9.25 ಬೇರೆ ಬೇರೆ ದೇವರ್ಕಳ ಪೂಜೆ ಮಾಡುವವಕ್ಕೆ ಅವರ ಸಿಕ್ಕುತ್ತು. ಸ್ತತುಹೋದವರ (ಪಿತೃಗಳ) ಪೂಜೆ ಮಾಡುವವು ಅವರತ್ತರಂಗೆ ಹೋವುತ್ತವು. ಗಾಳಿ, ನೀರು ಇತ್ಯಾದಿ ಭೂತಂಗಳ ಪೂಜೆಮಾಡುವವು ಅವರತ್ತರಂಗೆ ಹೋವುತ್ತವು. ಎನ್ನ ಪೂಜೆ ಮಾಡುವವು ಎನ್ನತ್ತರಂಗೆ ಬತ್ತವು.
9.26 ಆರಾದರುದೇ ಎಲೆ, ಹೂಗು, ಹಣ್ಣು, ನೀರು ಇದೆಲ್ಲಾ ಎನಗಾಗಿ ತೆಕ್ಕೊಂಡು ಬನ್ದು ಕೊಡುತ್ತವೋ ತುಂಬಾ ಪ್ರೀತಿಯಿಂದ ತಂದ ಅದರ ಆನುದೇ ಪ್ರೀತಿಯಿಂದಲೇ ತೆಕ್ಕೊಳುತ್ತೆ.
9.27 ಕುನ್ತಿಯ ಮಗನೇ, ಎಂತರ ಎಲ್ಲ ಮಾಡುತ್ತೆಯೋ, ಎಂತರ ಎಲ್ಲಾ ತಿಂತೆಯೋ, ಎಂತರ ಎಲ್ಲಾ ಹೋಮುಸುತ್ತೆಯೋ, ಎಂತರ ಎಲ್ಲಾ ಆರಿಂಗಾದರುದೇ ಕೊಡುತ್ತೆಯೋ ಎಂತೆಲ್ಲಾ ಕಷ್ಟ ಪಡುತ್ತೆಯೋ ಅದರ ಎಲ್ಲಾ ಎನಗೆ ಸಮರ್ಪಣೆ ಮಾಡಿಬಿಡು.
9.28 ಹೀಂಗೆ ಎನ್ನಲ್ಲಿ ಎಲ್ಲಾ ಸಮರ್ಪೆಣೆ ಮಾಡಿಗೊಂಡು ಜೀವಿಸಿದರೆ, ಒಳ್ಳೆದೂ ಹಾಳೂಹೇಳಿ ಫಲಕೊಡುವನ್ಥಾ, ಕೆಲಸಂಗಳಿಂದಲಾಗಿ ಕಟ್ಟಿಹಾಕಿದಾಂಗಿಪ್ಪ ಅವಸ್ಥೆಯಿಂದ ನಿನಗೆ ಬಚವಪ್ಪಲಕ್ಕು. ಬಚವಾದಮೇಲೆ ಅದೇ ರೀತಿಲಿ ಮುಂದೆ ಹೋದರೆ ಎನ್ನಲ್ಲಿಗೆ ಸೇರುಲುದೆ ಎಡಿಗು.
9.29 ಆನು ಎಲ್ಲಾ ಜೀವಿಗಳಲ್ಲಿಯುದೇ ತುಲ್ಯವಾಗಿಯೇ ಇಪ್ಪವ. ಎನಗೆ ಅಪ್ಪವ ಆಗದ್ದವ ಹೇಳಿ ಇಲ್ಲೆ. ಆರೆಲ್ಲಾ ಎನ್ನ ತುಂಬಾ ಭಕ್ತಿಯಿಂದ ಸೇವಿಸುತ್ತವೋ ಅವು ಇಪ್ಪದು ಎನ್ನಲ್ಲಿಯೇ, ಹಾಂಗೇ ಆನು ಅವರಲ್ಲಿಯುದೇ ನೆಲೆಸುತ್ತೆ.
9.30 ತುಂಬಾ ಮೋಸವಾದ ರೀತಿಲಿ ಜೀವಿಸಿದವನಾದರೂ ಕೂಡಾ, ಒಬ್ಬ ಬೇರೇ ಆರನ್ನುದೇ ಆಶ್ರಯಿಸದ್ದೇ ಎನ್ನನ್ನೇ ಸೇವಿಸಿಗೊಂಡಿದ್ದಾ ಹೇಳಿದ್ದರೆ ಅವನ ಒಳ್ಳೆಯವ ಹೇಳಿಯೇ ಗ್ರೇಶಿಸೆಕ್ಕು. ಎಂತಗೇ ಹೇಳಿದರೆ ಅವ ಈಗ ಸರಿಯಾದ ನಿಶ್ಚಯವನ್ನೇ ಮಾಡಿದ್ದ ಅಲ್ಲದಾ, ಹಾಂಗಾಗಿ.
9.31 ನೋಡು, ಇನ್ನವ ಬೇಗ ಒಳ್ಳೆಯವ (ಧರ್ಮಾತ್ಮ) ಆವುತ್ತಾ. ಅದು ಮಾಂತ್ರ ಅಲ್ಲ ಶಾಶ್ವತವಾದ ಶಾನ್ತಿಯನ್ನುದೇ ಹೊಂದುತ್ತಾ. ಏ ಕುನ್ತಿಯ ಮಗನೇ ನೀನೊಂದು ಸಂಗತಿ ಗಟ್ಟಿಯಾಗಿ ತಿಳುಕ್ಕೊ – ಎನ್ನ ಭಕ್ತ ಒಂದರಿಯದೇ ಹಾಳಾಗಿ ಹೋವುತ್ತಾ ಇಲ್ಲೆ.
9.32  ಹೆಮ್ಮಕ್ಕೊ ಆಗಲೀ, ವ್ಯಾಪಾರಿಗೆ, ಕೃಷಿಕಂಗೋ, ದನವ ಕಟ್ಟಿ ಹಾಲುಮಾರಾಟಮಾಡುದು ಇತ್ಯಾದಿಮಾಡುವವು ಆಗಲೀ, ಬರೇ ಶೂದ್ರುಗೊ ಆಗಲೀ (ಅಲ್ಲಾ ಇನ್ನು ಹೊಲೆ ಹದಿನೆಂಟು ಜಾತಿಲಿಪ್ಪವೇ ಆಗಲಿ) ಅವಕ್ಕೆಲ್ಲವುದೇ ಎನ್ನ ಭಕ್ತಿಯಿಂದ ಸೇವಿಸುಲೆ ಅರ್ಹತೆ ಇದ್ದು. ಹಾಂಗೆ ಸೇವಿಸಿ ಅತ್ಯುತ್ತಮವಾದ ಸ್ಥಾನವ ಅಥವಾ ಮೋಕ್ಷವ ಹೊಂದುಲುದೇ ಎಡಿಗು.
9.33 ಮತ್ತಿದ್ದೋ ಕಲಿವಿಕೆ ಇಪ್ಪ ಶಾಸ್ತ್ರಾರ್ಥಂಗಳಲ್ಲಿ ತಿಳುವಳಿಕೆ ಇಪ್ಪ ನಿನ್ನಾಂಗಿಪ್ಪವಕ್ಕೆ ಎಡಿಯದ್ದೆ?. ಹಾಂಗಾಗಿ ಎವಗಳೂ ನೆಲೆನಿಂಬ ಸುಖ ಸಿಕ್ಕದ್ದಂಥಾ ಈ ಲೋಕಕ್ಕೆ ಬನ್ದಂಥಾ ನೀನು ಎನ್ನ ಸೇವಿಸು.
9.34 ಎನ್ನಲ್ಲಿಯೇ ಮನಸ್ಸಿನ ಮಡುಗು. ಎನಗಾಗಿಯೇ ಯಾಗಂಗಳ ಪೂಜೆಗಳ ಮಾಡು. ಎನ್ನನ್ನೇ ಹೊಡಾಡುತ್ತಾ ಇರು. ಹೀಂಗೆ ಎನ್ನ ಬಗ್ಗೇ ಗ್ರೇಶಿಗೊಂಡು ಜೀವಿಸಿದರೆ ಎನ್ನನ್ನೇ ಪಡೆತ್ತೆ ನೋಡು.
-ಹೀಂಗೆ ಇಲ್ಲಿಗೆ ಗುರುವಿನ ಹತ್ತರಿದ್ದುಗೊಂಡು ಪಡವ ತಿಳುವಳಿಕೆಗಳಂಥಾ, ದೇವರಬಗ್ಗಿಪ್ಪ ವಿದ್ಯೆಯಾದಂಥಾ, ದೇವರೊಟ್ಟಿಂಗೆ ಸೇರುಲಿಪ್ಪ ಉಪಾಯವಾದಂಥಾ, ಶ್ರಿಕೃಷ್ಣ ಮತ್ತು ಅರ್ಜುನನ ಸಂವಾದ ರೂಪಲ್ಲಿಪ್ಪಂಥಾ, ದೇವರ ಮಾತುಗಳಲ್ಲಿ ಒಂಬತ್ತನೇ ಅಧ್ಯಾಯ ಇಡೀ ಆತು-    
(ಇದು ಬರದ್ದದು ಕೈಲಂಕಜೆ ಹರಿಹರ ಬಟ್ಟರ ಪುಳ್ಳಿ., ರಮಣ ಬಟ್ಟನ ಮಗ., ಪದ್ಯಾಣದ ಶಂಕರಿಯ ಮತ್ತೆ ಮಂಡ್ಯೂರು ಶಂಕರ ನಾರಾಯಣನ ಮಗಳು ವಿಜಯಲಕ್ಷ್ಮಿಯ ಮಗ., ಸಾಯಕ್ಕೆ ಮದುವೆಯಾಗಿ ಹೋಗಿ ಸಣ್ಣಾಗಿಪ್ಪಗಳೇ ವಿಧವೆಯಾದ ಅಮ್ಮನ ಅತ್ತೆ ಶಾರದಮ್ಮನವರು ಮಹಾಭಾರತ, ರಾಮಾಯಣಾ ಇತ್ಯಾದಿ ಹಲವಾರು ಕಥೆ ಹೋಳಿ ದೊಡ್ಡವಾಡಿದ ಆಶಾಕಿರಣ. 07.08.2013 ನೇ ಇಸವಿ ಶಿರಸಿಯಿಂದ ಕೋಯಂಬತ್ತೂರಿಂಗೆ ತಿರುಗಿ ಹೋಪಗ ಕೊಂಕಣ್ ರೈಲಿಲ್ಲಿ ಕೂದುಗೊಂಡು ಬರದ್ದದು. ಈಗ ಸುಮಾರು ಮಂಗಳೂರಿನತ್ತರಂಗೆ ಎತ್ತಿಯಾತು.)

ದೇವರ ಮಾತು ಎಂಟ್ಟನೇ ಅಧ್ಯಾಯ 8th Chapter of The Divine Message



ದೇವರ ಮಾತು ಎಂಟ್ಟನೇ ಅಧ್ಯಾಯ
ಅರ್ಜುನ ಕೇಳಿದ
8.1 ಬ್ರಹ್ಮ ಹೇಳಿದರೆ ಎಂತದು....ಅಧ್ಯಾತ್ಮ ಹೇಳಿದರೆ ಎಂತದು........ಕರ್ಮ ಹೇಳಿದರೆ ಎಂತದು........ಅಧಿ ಭೂತ ಹೇಳಿದರೆ ಎಂತದು.....ಅಧಿ ದೈವ ಹೇಳಿದರೆ ಎಂತದು.........
8.2 ಈ ದೇಹಲ್ಲಿ ಇದ್ದುಗೊಂಡು ಕೆಲಸಎಲ್ಲಾ ಮಾಡುಸುವ ಅಧಿಯಜ್ಞ ಆರು........ಮನಸ್ಸಿನ ಅಡಗಿಸಿದವಕ್ಕೆ ಹೋಪ ಕಾಲಲ್ಲಿ (ಸಾವ ಕಾಲಲ್ಲಿ) ಹ ನಿನ್ನ ಗೊಂತುಮಾಡುಲೆ ಹೇಂಗೆ ಎಡಿಗು..........
ದೇವರು ಹೇಳಿದವು...
8.3 ಆತ್ಯಂನ್ತಿಕವಾಗಿ ಯಾವಾಗಳು ಹಾಳಾಗದ್ದ ಅಥವಾ ಬದಲದ್ದದು ಎಂತದೋ ಅದು ಬ್ರಹ್ಮ.  ಆ ಬ್ರಹ್ಮನದ್ದೇ ಶರೀರಲ್ಲಿಪ್ಪ ರೂಪಕ್ಕೆ ಆತ್ಮ ಅಥವಾ ಅಧ್ಯಾತ್ಮ ಹೇಳಿ ಹೆಸರು. ಹೊಸ ಹೊಸ ಜೀವಜಾಲ ಅಥವಾ ವಸ್ತುಗಳು  ಉಂಟಪ್ಪನ್ಥಾ ಕೆಲಸ್ಕೆ ಕರ್ಮ ಹೇಳಿ ಹೆಸರು.
8.4 ದೇಹ ಇಪ್ಪವರಲ್ಲಿ ಶ್ರೇಶ್ಠನಾದವನೇ ಅರ್ಜುನಾ...... ಹಾಳಾಗಿ ಹೋಪ ದೇಹ ಮುಂತಾದ ಬಗೆಗೊ ಅಧಿ ಭೂತ ಹೇಳಿ ಹೆಸರು. ಸೂರ್ಯನ ಒಳಗಿಪ್ಪ ಶಕ್ತಿಯೇ ಅಧಿ ಪುರುಷ. ಈ ಕಾಂಬ ಶರೀರಂಗಳಲ್ಲಿ ಕಲಸಮಾಡುಲೆ ಕಾರಣವಾಗಿಪ್ಪದು ಆನೇ.......
8.5 ಸಾವಕಾಲಲ್ಲಿ ಎನ್ನನ್ನೇ ಯೋಚನೆ ಮಾಡಿಗೊಂಡು ಶರೀರವ ಬಿಟ್ಟರೆ ಆರು ಹೋವುತ್ತವೋ ಅವು ಎನ್ನದೇ ಭಾವವ ಹೊಂದುತ್ತವು. ಈ ವಿಷಯಕ್ಕೆ ಸಂಶಯ ಏನೂ ಇಲ್ಲೆ.
8.6 ತೀರಿ ಹೋಪ ಕಾಲಕ್ಕೆ ಆರೆಲ್ಲಾ ಏವದೆಲ್ಲಾ ರೂಪಂಗಳ ಗ್ರೇಶುತ್ತವೋ ಏವಾಗಳು ಆ ರೂಪಂಗಳ ಗ್ರೇಶಿದ ಕಾರಣ ಅವು ಅದೇ ರೂಪಂಗಳ ಹೊಂದುತ್ತವು.
8.7 ಹಾಂಗಾದ ಕಾರಣ ಏವಗಳುದೇ ಎನ್ನನ್ನೇ ನೆನಪಿಸಿಗೊಂಡು ಯುದ್ಧಮಾಡು. ಎನ್ನಲ್ಲಿ ಮನಸ್ಸು ಬುದ್ದಿಯ ಅರ್ಪಿಸಿದರೆ ಎನ್ನನ್ನೇ ಪಡೆತ್ತೆ ಅದಕ್ಕೆ ಸಂಶಯ ಇಲ್ಲೆ.
ಅದು  ಮಾಂತ್ರಅಲ್ಲ
8.8 ಪ್ರತಿದಿನ ಮಾಡುವ ಪೂಜೆ, ಪುನಸ್ಕಾರ, ಯೋಗ, ಧ್ಯಾನ, ವ್ರತ ಮುಂತಾದ ಅಭ್ಯಾಸಂಗಳಿಂದ ಬೇರೆ ಎಲ್ಲಿಗೂ ಸಂಚರಿಸದ್ದ ಮನಶ್ಶಕ್ತಿಯಿಂದ  ದೇವರನ್ನೇ ಮತ್ತೆ ಮತ್ತೆ ಗ್ರೇಶುವವ ಅವನನ್ನೇ ಪಡೆತ್ತಾ.
ಹಾಂಗಿಪ್ಪವು ಹೋಪ ದೇವರ ಬಗ್ಗೆ ವರ್ಣ್ಣನೆ ಇನ್ನು ಮುಂದೆ......
8.9 , 8.10 ತೀರಿ ಹೋಪ ಕಾಲದಲ್ಲಿ ಎಳಗದ್ದ ಮನಸ್ಸಿಂದ ಬಕ್ತಿಕೂಡಿಗೊಂಡು ಯೋಗಬಲವುದೆ ಕೂಡಿ ಇಪ್ಪವಾಗಿ ಜೀವಶಕ್ತಿಯಾದ ಪ್ರಾಣನ ಹುಬ್ಬುಗಳ ನಡುಗೆ ಸರಿಯಾಗಿ ನಿಲುಸಿ ಎಲ್ಲೋರನ್ನು ತಾಂಗಿಗೊಂಡಿಪ್ಪ ಇಂತಾ ರೂಪ ಹೇಳಿ ತಿಳಿವಲಾಗದ್ದ ಮದಲಿಂದಲೇ ಇಪ್ಪವನಾದ ಸೂರ್ಯನ ಬೆಣುಚಿಯ ನೆರ ಇಪ್ಪ ಇರುಳಿನ ಅಟ್ಟುವವನಾದ ದೇವರ ಬಗ್ಗೆ ಗ್ರೇಶಿಗೊಂಡು ಪ್ರಾಣ ಬಿಟ್ಟರೆ ದೇವರತ್ತರಂಗೇ ಹೋಗಿ ಸೇರುತ್ತವು.
8.11 ವೇದಾರ್ಥ ಗೊಂತಿಪ್ಪವು ಏವದರ ಬಗ್ಗೆ ಬದಲಾವಣೆ ಇಲ್ಲದ್ದದು ಹೇಳಿ ಹೇಳುತ್ತವೋ ಕೋಪ, ಬೇಜಾರು ಇತ್ಯಾದಿಗಳ ಬಿಟ್ಟ ಯತಿಗೊ ಎಲ್ಲಿ ಹೋಗಿ ಸೇರುತ್ತವೋ , ಯಾವ ಸ್ಥಾನವ ಪಡವಲಾಗಿ ಬ್ರಹ್ಮಚರ್ಯೆಯ ಅನುಸರಿಸುತ್ತವೋ ಆ ಸ್ಥಾನದ ಬಗ್ಗೆ ನಿನಗೆ ಸಂಕ್ಷಿಪ್ತವಾಗಿ ಹೇಳಿಕೊಡುತ್ತೆ.
8.12 ಕಣ್ಮು, ಬಾಯಿ, ಮೂಗು ಇತ್ಯಾದಿ ಶರೀರವುದೆ ಪ್ರಪಂಚವುದೆ ಪರಸ್ಪರ ತೊಡರ್ವುಗೊಳ್ಳುವ ಒಟ್ಟೆಗಳ ಎಲ್ಲಾ ಮುಚ್ಚಿ ಮನಸ್ಸಿನ ಮನಸ್ಸಿಲ್ಲಿಯೇ ನಿಲುಸಿ ತನ್ನ ಪ್ರಾಣ ಶಕ್ತಿಯ ತಲೆಯ ಒಳಗೆ ಹಿಡಿದು ಯೋಗವನ್ನು ಮಾಡೆಕ್ಕು.
8.13 ಓಂ ಕಾರವನ್ನು ಹೇಳಿಗೊಂಡು ಬ್ರಹ್ಮನ ಅಥವಾ ದೇವರ ಗ್ರೇಶಿಗೊಂಡು ಆರು ದೇಹವ ಬಿಡುತ್ತವೋ ಅವ ತುಂಬಾ ಮೇಲೆ ಮಟ್ಟಲ್ಲಿಪ್ಪ ಗತಿಯ ಹೊಂದುತ್ತ. (ಮೋಕ್ಷವ ಹೊಂದುತ್ತ)
8.14 ಬೇರೆ ಸಂಗತಿಗಳ ಬಗ್ಗೆ ತಲೆಕೆಡುಸದ್ದೆ ಎನ್ನನ್ನೇ ಪ್ರತಿದಿನ ಆರ ಗ್ರೇಶುತ್ತವೋ ಅವಂಗೆ ಆನು ಸುಲಾಭಲ್ಲಿ ಸಿಕ್ಕುವವನೇ........    
8.15 ಎನ್ನ ಹತ್ತರೆ ಬನ್ದು ಶ್ರೇಷ್ಠವಾದ ಮೋಕ್ಷಸ್ಥಾನವ ಪಡೆದ ಮಹಾತ್ಮರಿಂಗೆ ಪುನಃ ಬೇಜಾರಿನ ಮನೆಯಾದ ಶಾಶ್ವತ ಅಲ್ಲದ್ದ ಮತ್ತು ಮತ್ತು ಹುಟ್ಟುವ ಸಂಗತಿಗೆ (ಪುನರ್ಜನ್ಮ) ಬರೆಕ್ಕಾಗಿ ಬತ್ತಿಲ್ಲೆ.
8.16 ಏ ಅರ್ಜುನಾ ನೀನೊಂದು ಸಂಗತಿ ತಿಳಿಯೆಕ್ಕಾದ್ದದೆತ್ತಾಂಳಿದರೆ ಬ್ರಹ್ಮನ ಲೋಕವರೇಗಿಪ್ಪ ಎಲ್ಲಾ ಲೋಕಂಗಳಲ್ಲಿ ಹೋದರುದೆ ಮತ್ತೆ ತಿರುಗೆ ಭೂಮಿಗೆ ಬರೆಕ್ಕಾವುತ್ತು. ಆದರೆ ಎನ್ನತ್ತರಂಗೆ ಬನ್ದರೆ ಪುನರ್ಜನ್ಮ ಇಲ್ಲೆ.
8.17 ಮನುಷ್ಯರ ಸಾವಿರ ಯುಗ ಸೇರುವದು ಬ್ರಹ್ಮನ ಒಂದು ಹಗಲು. ಹಾಂಗೆ ಮತ್ತೆ ಸಾವಿರ ಯುಗ ಸೇರಿದರೆ ಇರುಳು (ರಾತ್ರಿ). ಹೀಂಗಿಪ್ಪ ತಿಳುವಳಿಕೆಯ ಜ್ಯೋತಿಷ ಗೊಂತಿಪ್ಪ ವಿದ್ವಾಂಸರಿಂಗೆ ಗೊಂತಿರುತ್ತು. (ಅಹೋರಾತ್ರ ಲೋಪವಾಗಿ ಹೋರಾ ಹೇಳಿ ಆದ್ದದು. ಹೋರ ಬದಲಿ ಇಂದಿನ ಅವರ್ (ahorathra – hora - hour).
8.18  ಬ್ರಹ್ನನ ಹಗಲು ಸುರುಅಪ್ಪಗ ವ್ಯಕ್ತವಲ್ಲದ್ದ ರೂಪಲ್ಲಿಪ್ಪ ಶಕ್ತಿಯಿಂದ ಒಂದೊಂದೇ ಜೀವಜಾಲ ವ್ಯಕ್ತರೂಪವ ತಾಳುತ್ತವು. ಹಾಂಗೆ ತಿರುಗ ಹ್ರಹ್ಮನ ಇರುಳಪ್ಪಗ ಈ ಜೀವಜಾಲವೆಲ್ಲಾವುದೆ ವ್ಯಕ್ತವಲ್ಲದ್ದ ಸ್ಥಿತಿಗೆ ತಿರುಗಿ ಹೋವುತ್ತವು.
8.19 ಮಣ್ಮು ಗಾಳಿ ನೀರು ಕಿಚ್ಚು ಆಕಾಶ ಈ ಐದು ಭೂತಂಗಳ ಜೋಡಣೆಯಾದ ಜೀವಜೀಲ ಮತ್ತು ಮತ್ತು ಉದ್ಭವವಾಗಿ ಇಲ್ಲದ್ದೆ ಆಗುತ್ತು.ಇರುಳಪ್ಪಗ ಇಲ್ಲದ್ದೆ ಆಪ್ಪ ಈ ಬೂತದಜೋಡಣೆ ಹಗಲು ಪುನಾ ಉಂಟಾವುತ್ತು.
8.20 ಈ ಅವ್ಯಕ್ತರೂಪಲ್ಲಿಪ್ಪ ವಸ್ತುವಿಂಗುದೆ ಹಿಂದಿನ ವಸ್ತುವಾದ ಸನಾಚನ ಬ್ರಹ್ಮ ಎಲ್ಲಾ ಜೀವಜಾಲ ಇಲ್ಲದ್ದೆ ಆದರುದೇ ಇಲ್ಲದ್ದೆ ಆವುತ್ತಿಲ್ಲೆ.
8.21 ಎನ್ನ ಪರವವಾದ ಸ್ಥಾನಕ್ಕೆ ವ್ಯಕ್ತವಲ್ಲದ್ದದು, ಹಾಳಾಗದ್ದದು ಹೇಳಿಎಲ್ಲಾ ವೇದಲ್ಲಿ ಹೆಸರಿದ್ದು. ಅಲ್ಲಿಗೆ ಎತ್ತಿದರೆ ಮತ್ತೆ ತಿರುಗಿ ಬಪ್ಪಲಿಲ್ಲೆ.
8.22 ಪಾರ್ಥಾ, ಎಲ್ಲಾದಕ್ಕುದೆ ಕಾರಣವಾದವನಾದ ಎಲ್ಲಾವಸ್ತುಗಳನ್ನು ತನ್ನ ಒಳಗೆ ಧರಿಸಿಗೊಂಡಿಪ್ಪವನಾದ ಆ ಪರವಪುರುಷನು ಬೇರೆ ಆರತ್ತರುದೆ ಇಲ್ಲದ್ದ ಭಕ್ತಿಯಿಂದ ಮಾಂತ್ರ ಸಿಕ್ಕುವವನಾಗಿದ್ದ.
8.23 ಯೋಗಿಗೊ ಕೆಲವು ಕಾಲ ಇಲ್ಲಿಂದ ಸತ್ತು ಹೇದರೆ ತಿರುಗಿ ಬರೆಕ್ಕಾಗಿ ಬತ್ತು. ಕೆಲವು ಕಾಲ ಹೋದರೆ ತಿರುಗಿ ಬತ್ತವಿಲ್ಲೆ. ಹಾಂಗೆ ಎರಡು ಕಾಲ ಇದ್ದು. ಅದೆರಡನ್ನು ನಿನಗೆ ತಿಳಿಶುತ್ತೆ.
8.24 ಕಿಚ್ಚು, ಬೆಣುಚ್ಚಿ, ಹಗಲು, ಶುಕ್ಷಪಕ್ಷ, ಉತ್ತರಾಯಣಲ್ಲಿಪ್ಪ ಆರುತಿಂಗಳುಗೊ, ಈ ಕಾಲದಲ್ಲಿ ಹೋಪ ಬ್ರಹ್ಮನ ಬಗ್ಗೆ ತಿಳುವಳಿಕೆ ಬನ್ದವು ಬ್ರಹ್ಮನಲ್ಲಿಯೇ ಸೇರುತ್ತವು.
8.25 ಹೊಗೆ, ಇರುಳಪ್ಪಗ, ಹಾಂಗೇ ಕೃಷ್ಣ ಪಕ್ಷ, ದಕ್ಷಿಣಾಯನದ ಆರು ತಿಂಗಳುಗೊ ಈ ಕಾಲಲ್ಲಿ ಹೋಪ ಯೋಗಲ್ಲಿ ವುಂದುವರುದ ಆದರೆ ಅಭ್ಯಾಸ ಇಡೀ ಆಗದ್ದವು  ಚನ್ದ್ರನ ಬೆಣುಚ್ಚಿ ಇಪ್ಪ ಲೋಕಕ್ಕೆ ಹೋಗಿ ತಿರುಗಿ ಬತ್ತವು.
8.26 ಬೆಳಿ ದಾರಿ, ಕಪ್ಪು ದಾರಿ ಹೀಂಗೆ ಎರಡು ದಾರಿಗೊ ಈ ಲೋಕಲ್ಲಿ ಏವಗಳುದೇ ಇಪ್ಪದಾರಿಗೊ. ಅದರಲ್ಲಿ ಬೆಣುಚ್ಚಿ ಇಪ್ಪ ದಾರಿಲಿ ಹೊದರೆ ತಿರುಗಿ ಬಪ್ಪಲಿಲ್ಲೆ. ಆಚ ದಾರಿಲಿ ಹೋದರೆ ಮತ್ತುದೆ ಮತ್ತುದೆ ಸುತ್ತೆಕ್ಕಾವುತ್ತು.
8.27 ಹೀಂಗೆ ಎರಡು ದಾರಿ ಇದ್ದು ಹೇಳಿ ಗೊಂತಿಪ್ಪ ಆರುದೇ ಸತ್ಯವ ಮರದು ಜೀವಿತವೇ ಶಾಶ್ವತ  ಹೇಳಿ ತಪ್ಪಾದ ತಿಳುವಳಿಕೆಲಿ ಇರುತ್ತವುಲ್ಲ.
ಹಾಂಗಾಗಿ ನೀನುದೇ ಎಲ್ಲಾ ಕಾಲವುದೆ ಯೋಗವ ಪರಿಶೀಲಿಸುವವನಾಯೆಕ್ಕದ ಅರ್ಜುನಾ (ಬ್ರಹ್ಮಜ್ಝಾನವ ಪಡವಲೆ ಪ್ರಯತ್ನ ಮಾಡೆಕ್ಕು ಹೇಳಿ ದೇವರು ಹೇಳುವದು)
8.28    ಈಗ ಆನು ಹೇಳಿದ ಸಂಗತಿ ಗೊಂತಾದರೆ ವೇದಗ್ರನ್ಥಂಗಳಿಂದ, ಪೂಜೆ ಪುನಸ್ಕಾರಂಗಳಿಂದ, ತಪಸ್ಸಿಂದಲಾಗಿ, ದಾನಂಗಳಿಂದಲಾಗಿ,ಎನ್ತೆಲ್ಲಾ ಪುಣ್ಯಫಲ ಸಿಕ್ಕುಗು ಹೇಳಿ ಇದ್ದೋ ಆದಕ್ಕಿಂತಲೂ ಹೆಚ್ಚು ಪುಣ್ಯಸಿಕ್ಕಿದವನಾಗಿ ತೀರಿಕ್ಕಿ, ಈ ಜಗತ್ತಿಂಗೇ ಅಡಿಸ್ಥಾನವಾಗಿಪ್ಪ ಪರಮವಾದ ಸ್ಥಾನವ ಹೊಂದುತ್ತ.
ಹೀಂಗೆ ಒಳ್ಳೆದಾದ ದೇವರ ಮಾತುಗಳ ರೂಪಲ್ಲಿಪ್ಪ ದೇವರ, ಲೋಕದ ಮತ್ತೆ ನಮ್ಮ ಬಗ್ಗಿಪ್ಪ ತಿಳುವಳಿಕೆಯ ಪುಸ್ತಕದ ಎಂಟನೇ ಅಧ್ಯಾಯ ಇಲ್ಲಿಗೆ ಇಡೀ ಆತು.
(01.08.2013 ರಯಿಲಿಲ್ಲಿ ಮಧೂರು ದೇವಸ್ಷಾನ. ಮತ್ತೆ ಎಂಗಳ ಮನೆತನದ ದಿವ್ಯಸ್ಥಾನವಾದ ಏರಿಕ್ಕುಳ ಇಲ್ಲಿಗೆ ಹೋಗುವ ದಾರಿಗೆ ಇರುಳಪ್ಪಗ 10.33ರಕ್ಕೆ ವೆಸ್ಛ್ ಕೋಸ್ಠ್ ಕೂಕೂ ಬಂಡಿಲಿ ಮೇಗಾಣ ಮಂಚಲ್ಲಿ ಕೂದುಗೊಂಡು ಬರದ್ದದು.)